ಅರ್ಥ-೩ ಏಪ್ರಿಲ್, ೨೦೨೦
ಅರ್ಥ ಸಂಗ್ರಹದ ಮೂರನೆಯ ಸಂಚಿಕೆಯನ್ನು ಈಗ ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ವಾಭಾವಿಕವಾಗಿಯೇ ಎಲ್ಲಾ ಲೇಖನಗಳು ಕೊರೋನ ಮಹಾಮಾರಿಯ ಪರಿಣಾಮದಿಂದ ಉಂಟಾಗಬಹುದಾದ ಆರ್ಥಿಕ ಬಿಕ್ಕಟ್ಟನ್ನು ಕುರಿತೇ ಇದೆ. ಮತ್ತೆ ಅದೇ ಚರ್ಚೆ. ಜೀವ ಮುಖ್ಯವೋ ಜೀವನ ಮುಖ್ಯವೋ? ಹಾಗೇ ಇವೆರಡನ್ನು ಎದುರು ಬದುರು ಇಟ್ಟು, ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವುದು ಸರಿಯಲ್ಲ. ನಿಜ, ವೈರಾಣುವನ್ನು ನಿಯಂತ್ರಿಸುವುದು ಬಹಳ ಮುಖ್ಯ, ಅದಕ್ಕೆ ಆದ್ಯತೆ ಕೊಡಬಾರದು ಎಂದು ಯಾವ ಅರ್ಥಶಾಸ್ತ್ರಜ್ಞರು ಹೇಳುತ್ತಿಲ್ಲ. ಆದರೆ ಅದು ಸೃಷ್ಟಿಸುತ್ತಿರುವ, ಹಾಗೂ ಮುಂದೆ ಬರುವ ಆರ್ಥಿಕ ಬಿಕ್ಕಟ್ಟು ಅಷ್ಟೇ ಮುಖ್ಯ. ಅದನ್ನು ಗಮನಿಸದೇ ಹೋದರೆ ಮುಂದೆ ತೊಂದರೆ ತೀವ್ರವಾಗಬಹುದು ಅನ್ನುವ ಎಚ್ಚರಿಕೆ ಬೇಕು.
ಈ ದೃಷ್ಟಿಯಲ್ಲಿ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು, ಚಿಂತನೆಗಳನ್ನು, ಸಲಹೆಗಳನ್ನು ಇಲ್ಲಿ ಒಂದು ಕಡೆ ಕೊಡಲಾಗಿದೆ. ಅಭಿಜಿತ್ ಬ್ಯಾನರ್ಜಿ, ರಘುರಾಂ ರಾಜನ್, ಕೌಶಿಕ್ ಬಸು, ಅಮರ್ತ್ಯಸೇನ್ ಮೊದಲಾದ ಪ್ರಖ್ಯಾತ ಅರ್ಥಶಾಸ್ತ್ರಜ್ಞರ ಮಾತುಗಳನ್ನು ಇಲ್ಲಿ ಸಂಗ್ರಹಿಸಿದ್ದೇವೆ. ಜೊತೆಗೆ ಕೇರಳದ ಪ್ರಯೋಗವನ್ನು ಕುರಿತಂತೆ ಅದರ ಮುಖ್ಯಮಂತ್ರಿಗಳ ಮಾತನ್ನು ಕೊಡಲಾಗಿದೆ. ಹಿಂದಿನ ಸಂಚಿಕೆಯಲ್ಲಿ ನೀಡಿದ್ದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೊ ಅವರ ವಲಸೆಕಾರ್ಮಿಕರ ಅಧ್ಯಯನದ ಎರಡನೆಯ ಭಾಗವಿದೆ.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ,
ವೇಣುಗೋಪಾಲ್
https://impu.in/blog1/wp-content/uploads/2020/04/artha-3.pdf